Wednesday, December 12, 2012

ಇರಕ್ಕಾಗದಿಲ್ಲೆ ಹೋಗಕ್ ಹರಿಯದಿಲ್ಲೆ

" "

 ಕಂಡಾಪಟ್ಟೆ  ಅನ್ನುವಂತ ಸಂಬಳ ಏನ್ ಬರೋದಿಲ್ಲ. ಅಷ್ಟಕ್ಕೂ ನಾವ್  ಕಾಲೇಜ್ ಅಲ್ಲಿದ್ದಾಗ ಕನಸು ಕಂಡ ಐದಂಕಿ ಸಂಬಳವೇ ಬಂದ್ರು ಬೆಂಗಳೂರು ಲೆವೆಲ್ಲಿಗೆ ಇವೆಲ್ಲ ಬುರ್ನಾಸು ಅಂತ ಅಂದಾಜಾಗಿ ಹೋಗಿದೆ .ಸಾಗರದಲ್ಲಿ ಬರುವ ನಾಕೆ ಅಂಕಿಯ ಸಂಬಳದಲ್ಲಿ ಇದಕ್ಕಿಂತ ಸುಖವಾಗಿ ಬದುಕಬಹುದು ಹೇಳೆಲ್ಲ ಗೊತ್ತಿದ್ರು ಕೂಡ "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಒಂದು ರುಪಾಯಿ ಬಾಡಿಗೆ ಕೊಡದೆ ಸಿಗುವ (ಇರುವ ) ದೈದಾಳ ಮನೆಯಲ್ಲಿ  ಮದ್ಯಾನ ಸೈತ  ಮನ್ಕ್ಯಂಡು  , ಮನಸು ಕಂಡಾಗ ಕವಳ  ಹಾಕಿ  ದಿನ ಎರಡೆರಡು  ತಾಸ್  ಕ್ರಿಕೆಟ್  ಆಡಿ , ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ,ಈ ಶರ್ಟ್  ಹಾಕಿರೆ ಹೊಟ್ಟೆ  ಕಾಣ್ತನ  ಹೇಳುವ ಕೇಳುವ ಪ್ರಶ್ನೆಯೇ  ಇಲ್ಲದ ದಿಲ್ದಾರ್ ಬದುಕು ಅದರೂ  "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ  ".!!

ಬೆಳಗೆ ನಿದ್ದೆ ಮುಗದ್ ಮೇಲೇ  ಎದ್ದು  ಜೀವವಿರುವ  ದನದ  ಜೊತಿಗೆ ಕೆಲಸ ಮಾಡಿ  ದೋಸೆ ತಿಂದು ಪೇಪರ್ ಓದಿ , ನಮ್ಮನೆ ತೋಟ ನಮ್ಮನೆ ಗದ್ದೆ ಹೇಳಿ ಓಡಾಡಿ , "ಹೊತ್ತಾತು  ಸ್ನಾನ ಮಾಡ ಹಂಗಾರೆ" ಹೇಳುವ ಅಪ್ಯಾಯಮಾನ ಗದರುವಿಕೆ  ಕೇಳಿ , ಕರೆಂಟು  ಬಿಲ್ಲಿನ , ನೀರ ಕೊರತೆಯ ಚಿಂತೆ ಇಲ್ಲದೆ  ಒಂದು ಹಂಡೆ ನೀರಿನ ಸ್ನಾನ ಮಾಡಿ ಗಡದ್ದಾಗಿ  ಹೊಡೆಯುವ ಊಟದ ನೆನಪು ಕಾಡಿರೂವ   "ಇರಕ್ಕಾಗದಿಲ್ಲೆ  ಹೋಗಕ್ ಹರಿಯದಿಲ್ಲೆ .!!

ದುಡ್ಡು ಸುಖದ ಅರ್ಥವನ್ನೇ ಬದಲಿಸಿ ಕುಂತಿದ್ದು !!

Tuesday, November 13, 2012

ಬೈಕು ಮತ್ತು ದೀಪಾವಳಿ

ಪೂಜೆ ಹೇಳೋದೇ ಆತ್ಮಸಾಕ್ಷಿಯ ಆರಾಧನೆಯ ಪ್ರತೀಕ. ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ತಿರುಗಿ  ಗೌರವ ಸೂಚಿಸುವ ಸಂಕೇತ. ಪೂಜೆ ಯಾವತ್ತು ಯಾವ್ದಕ್ಕೆ ಮಾಡಿದರೂ ಒಂದೇ. ಒಳ್ಳೆಯದೇ. ಅದರೂ ಡೆಡ್ಲೈನ್ ಕೊಡದಿದ್ದರೆ ಸಂಬಳ ಕೊಟ್ಟು ಮಾಡಿಸುವ ಕೆಲಸವೇ ಆಗುವುದಿಲ್ಲ. ಇನ್ನು ಪೂಜೆ ಮಾಡು ಅಂದ್ರೆ ಮಾಡಿದ ಹಂಗೇನೆ.

ಅದು  ಹಾಗಿರಲಿ .ನವರಾತ್ರಿಯಂದು   ಆಯುಧ ಪೂಜೆ ಅಂತ ಬೆಂಗಳೂರಿಗರೆಲ್ಲ ಸಾಲು ಸಾಲು ಗಾಡಿಗಳಿಗೆಲ್ಲ  ಬಾಳೆ ತೋಟ ಸಿಕ್ಕಿಸಿಕೊಂಡು ಓಡಾಡುತ್ತಾರೆ. ನಾವು ಸಾಗರಿಗರು ಮಾತ್ರ ಯಾಕೆ  ದೀಪಾವಳಿಯಂದು  ಮಾಡುತ್ತೇವೆ??. ನನ್ನ ಗೆಳೆಯರ ಭಾಷೆಯಲ್ಲಿ ,"ನಿಮ್ದೆನ್ ಸ್ಪೆಷಲ್ಲು "??

actually , ಬೈಕು ಕಾರು , ಗುದ್ದಲಿ ಹೆಡಿಗೆ ಇವೆಲ್ಲ "ಆಯುಧಗಳಲ್ಲ"(Not weapons) . ಅದು "ಆಸ್ತಿ"(Asset). ಲಕ್ಷ್ಮಿ. ಬೆಂಗಳೂರಿಗರು ಅದನ್ನೆಲ್ಲ ಆಯುಧದ ತರಹ ಉಪಯೋಗಿಸಬಹುದು. ನಾವು ಅದನ್ನ ನೀಟಾಗಿ ಉಪಯೋಗಿಸುತ್ತೇವೆ. ಹಾಗಾಗೆ ಆಯುಧಪೂಜೆ ಮಾಡುತ್ತೀರಿ . ನಾವು ಲಕ್ಷ್ಮಿಪೂಜೆ.

ಬೆಂಗಳೂರೇ ಹಾಗೆ . ದಿಕ್ಕು ತಪ್ಪಿ ಬಿಟ್ಟಿದೆ.!!!

Saturday, September 15, 2012

ಒಂದು ಪ್ರೇಮಪತ್ರ

ಗೆಳತಿ.,,
ನಿನ್ನ ಸೌಂದರ್ಯ ಅನೂಪವಾದುದು .,ಅನೂರವಾದುದು.ನಿನ್ನ ರೂಪ ನನ್ನಂತರಗದ ಹೃದಯ ವೀಣೆಯ ಮೀಟಿ .,ನನ್ನ ರೋಮಾಂಚನದ ತಂತುವಾಗಿ ಮಾಡಿದೆ.ನಿನ್ನ ಮುಂಗುರುಳು ನಿನ್ನ ಕೆನ್ನೆ ತಾಕುವ ಪ್ರತಿ ಹೊತ್ತು ನನ್ನೆದೆಯ ನಗಾರಿಯ ಜೀವ ಹುಚ್ಚೆದ್ದು ಕುಣಿ ಕುಣಿದು ಕುಶಿ ಪಡುತ್ತಿದೆ.ಆ ಹುಬ್ಬ ಒಂದು ಕೊಂಕು ಈ ಪಾಮರನ ಮನಸಿನ ಅಂಚಂಚಲ್ಲು ಅಳಿಸಲಾಗದ ಭಾವಗಳ ಚಿತ್ರಗೀತೆ ಬರೆಯುತ್ತಿವೆ.ಕಣ್ಣಂಚಿನ ಆ ನೋಟದ ಒಂದು ಕ್ಷಣಕ್ಕಾಗಿ ನಾ ನನ್ನ ಕಣ್ಣ ಕೂಪದಲಿ ಕನಸುಗಳ ಬಣ್ಣ ತುಂಬಿ ಕನಸ ನೋಟದ ಅನುಭಾವಕೆ ಕನಲಿ ಕಾತರಿಸಿಹೆನು.ತುಂಟ ತುಟಿಯ ಆ ಕಿರು ನಗು ನನ್ನ ಮನದೊಳಗಿನ ಬಹುಕಾಲದ ಮುತ್ತಾಗಿ ಎಂದು ರೂಪಾಂತರ ಆಗುತ್ತದೆಂದು .., ಜೀವನದ ಆ ಪುಟದ ಆ ಕ್ಷಣಕ್ಕಾಗಿ ಈ ಜೀವ ಪ್ರತಿನಿಮಿಷ ಕಾಯುತ್ತಿದೆ.ನಿನ್ನ ಗಲ್ಲ ಹಿಡಿದು ಬೆಲ್ಲಕ್ಕಿಂತ ಸಿಹಿ ಮತ್ತೊಂದಿದೆ ಅಂತ ಕೂಗಿ ಕೂಗಿ ಹೇಳಬೇಕುಂದು ಮನಸು ಮನಸ ಮಾಡಿಯಾಗಿದೆ ಹುಡುಗಿ.
ನಿನ್ನ ಮುತ್ತಿನಂತ ಪಾದಗಳ ಮೇಲೆ ನಾನು  ತುಟಿಯ ಪ್ರೆಮದುಂಗುರವಿತ್ತು.,ನಿನ ಕಾಲ್ಗಳಿಗೆ ಗೆಜ್ಜೆ ಕಟ್ಟಿ .., ಆ ಗೆಜ್ಜೆಯ ಸದ್ದಿಗೆ ನಾ ಕುಣಿದು ಅದ ನೋಡಿ ಈ ಮರ .. ಆ ಧರೆ .., ಅಲ್ಲಿರುವ ರವಿಚಂದ್ರ ಎಲ್ಲ ಕನ್ಮುಚ್ಚಿಕೊಂಡಾಗ ನಿನ್ನ ಗಲ್ಲ ಹಿಡಿದೆತ್ತಿ ನನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಹುಚ್ಚು ಆಸೆಗೆ ನೀ ನಕ್ಕು ಬಿಡುತ್ತಿಯೇನೋ.
ಬಾಳೆ ಹಣ್ಣು ಬಾಯಿಗೆ ರುಚಿ ..,ಬಾಳೂ ಹೆಣ್ಣು ಮನಸ್ಸಿಗೆ ಶುಚಿ ಅಂತ ನಿನ್ನ ಪ್ರಿತಿಸಿದ್ದೇನೆ. ಪ್ರೆಮಿಸಿದ್ದೇನೆ.ಬಾಳಲ್ಲಿ ಬೆಳಕಾಗಲಾರೆಯ ಹುಡುಗಿ..ಒಮ್ಮೆ ಒಂದೇ ಒಂದು ಬಾರಿ ನಿನ್ನ ಮನಸಿನ ಶಾಶ್ವತ ಹುಡುಗನನ್ನಾಗಿ ನನಗೆ ಜಾಗ ಕೊಡಲಾರೆಯಾ.ಇಷ್ಟೆಲ್ಲಾ ಆಗಿ ..ಈ ಬರುವ ಪ್ರೇಮಿಗಳ ದಿನ .,ನನಗೂ ಅಗಲಿ ಎಂಬ ಹೊನ್ನಾಸೆಯೊಂದಿಗೆ ನನ್ನೆದೆಯರಸಿಯಾಗು ನೀ ಎಂದು ಆಹ್ವಾನವಿತ್ತಿದೇನೆ ಹುಡುಗಿ.ಒಪ್ಪಿಕೊಳ್ಳೆ ದೊರೆಸಾನಿ



(ತುಂಬಾ ಹಿಂದೆ ಬರೆದದ್ದು .ನೆನಪಿಗೆ )

Wednesday, September 12, 2012

ಅರೆಬೆಂದ ಮಾತುಗಳು.

ಉರ್ದು ಕವಿ ಸಾಹಿರ್ ಒಮ್ಮೆ ಎಲ್ಲೋ ಉಸುರುತ್ತಾನೆ ." ಹರ್ ಯುಗ್ ಮೇ ಬದಲ್ತೆ ರಹೇ ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ".

ಎರಡೆರೆಡು ಭಾರಿ ಭಾಗವಾದ ಹೃದಯವನ್ನ ಒಂದು ಕೈಲೂ , ಮದಿರೆ ಬಾಟಲಿಯ ಕಂಠವನ್ನ ಮತ್ತೊಂದು ಕೈಲಿ ಹಿಡಿದುಕೊಂಡು ಚಿನ್ನದಂತ ಕವನಗಳನ್ನ ಕೊಟ್ಟ ಸಾಹಿರ್ನ ಮಾತುಗಳನ್ನ ಕೇಳಿದಾಗಲೆಲ್ಲ  ಒಂದು ಜೀವನ ಶೈಲಿಯ ಚಲನಶೀಲತೆ ಕಣ್ಣ ಮುಂದಿನ ಚಲನಚಿತ್ರವಗುತ್ತದೆ .ಹುಡುಗಿಯರ ಪಕ್ಕ ಕೂರಿಸುವುದೊಂದು ಶಿಕ್ಷೆಯಾಗಿದ್ದ ಕಾಲದಿಂದ ಅದೊಂದು ತಹತಹಿಕೆಯಾಗುವ ಕಾಲದವರೆಗೂ , ತಂಬಾಕು ಕ್ಯಾನ್ಸರ್ಗೆ ಕಾರಣ ಎಂದು ಓದೋದುತ್ತಲೇ ಸಿಗರೇಟ್ ತುದಿಗೆ ಕಿಚ್ಚಿಟ್ಟು ಅಪ್ಪನ  ಹಿಡಿತದಿಂದಾಚೆ ಬಂದೆ ಎಂದು ಸ್ವಾತಂತ್ರ್ಯೋತ್ಸವ ಆಚರಿಸುವ ಹದಿ ಹುಡುಗನವರೆಗೂ, ಎಲ್ಲವೂ ಚಲನಶೀಲತೆಯೇ.

ಬಹುಶಃ ಈ ತರದ್ದೊಂದು ಚಲನಶೀಲತೆಯೇ  ಧರ್ಮ , ಮತ್ತು ಮನುಜ  ನಾಗರೀಕವಾಗುವ ಪ್ರಕ್ರಿಯೆ. ಸಾಂಸ್ಕೃತಿಕ ಅನನ್ಯತೆಯನ್ನ ಕಾಪಾಡಿಕೊಳ್ಳುವ ಚೌಕಟ್ಟಿನಲ್ಲಿ ಚಲನೆಯನ್ನ ಒಪ್ಪಿಕೊಳ್ಳದ ಮತ್ತು ಸಾಮಾಜಿಕ  ವೇಗವನ್ನು ಒಡಲೊಳಗೆ ಇಟ್ಟುಕೊಂಡ ಎರೆಡು ಮನಸ್ತಿತಿಗಳು ಎದಿರುಬದರಾಗಿ ನಿಂತುಕೊಂಡಾಗಲೆಲ್ಲ  ಧರ್ಮ ಮತ್ತು ಸಂಸ್ಕೃತಿಯ ಅರ್ಥವ್ಯಾಪ್ತಿಯನ್ನ ಪರಿಷ್ಕರಿಸುತ್ತವೆ.ತಮ್ಮ ಜಾತಿಯ ಹುಡುಗಿ ನಮಗೆ ಬೀಳುವುದಿಲ್ಲ ಎಂಬ ಹುಡುಗನ ಅಸಹನೆ , ವೈಯುಕ್ತಿಕ ಅಭೀಪ್ಸೆಗಳಿಗೆ ಸಾಂಸ್ಕೃತಿಕ ಚೌಕಟ್ಟನ್ನ ನೀಡಿ ಚಲನೆಯನ್ನ ನಿಯಂತ್ರಿಸುವ  ಕ್ರಿಯೆಯಾದರೆ , ನಮ್ಮ ಜಾತಿಯ ಹುಡುಗರು ಸಂಕುಚಿತ ಮನಸ್ತಿತಿಯವರು ಎಂಬ ಹುಡುಗಿಯ ಆರೋಪ , ಸಾಮಾಜಿಕ ವೇಗದ ಕದಲಿಕೆಯಿಂದುಂಟಾದ ಕನಲಿಕೆ.

ಹತ್ತು ವರ್ಷಗಳ ಹಿಂದಿನ ನಮ್ಮದೇ ಸಾಂಸ್ಕೃತಿಕ ಚಿಂತನೆಗೂ ಇವತ್ತಿನ ನಮ್ಮ ಸಾಂಸ್ಕೃತಿಕ ಚಿಂತನೆಗೂ ಹತ್ತು ಹಲವು ವ್ಯತ್ಯಾಸಗಳಿರುವಾಗ , ಯಾವ ಕಾಲಘಟ್ಟದ ಆದರ್ಶವನ್ನ ಪಾಲಿಸಬೇಕೆಂಬ ಪ್ರಶ್ನೆಗೆ , ಹಿರಿಯ ತಲೆಮಾರು ಉತ್ತರ ಕೊಟ್ಟಿದ್ದಿಲ್ಲ, ಯುವ ತಲೆಮಾರು ಹುಡುಕುವ ಪ್ರಯತ್ನ ಮಾಡಿದ್ದಿಲ್ಲ.ಪಂಚೆಯಿಂದ ಪ್ಯಾಂಟಿಗೆ ಬದಲಾದಾಗ ಆಗದ ಸಂಘರ್ಷ , ಸೀರೆಯಿಂದ ಜೀನ್ಸಿಗೆ  ಬದಲಾದಾಗ ಕಾಣುತ್ತದೆ. ನಮ್ಮದೇ ಸಮಾಜ ಒಂದೇ ಪ್ರಕ್ರಿಯೆಗೆ ಎರಡು ವಿಭಿನ್ನ ಪ್ರತಿಕ್ರಿಯೆಗಳನ್ನ ನೀಡುತ್ತದೆ.

ಯಾವ ಬದಲಾವಣೆ ಅಗತ್ಯ ಎನ್ನುವ ಸಂದೇಹ ಸಾಮಾನ್ಯ ಮತ್ತು ಅದನ್ನ ಸಮರ್ಥಿಸಿಕೊಳ್ಳುವ ತಳಹದಿ ಕೂಡ ಸಾಪೇಕ್ಷ.  ಹುಡುಗ ಹುಡುಗಿ ಬಂಧನಗಳಿಲ್ಲದ ಸಂಬಂಧದೊಳಗಿರುವುದು ಒಂದಿಷ್ಟು ಜನಕ್ಕೆ ಕೌಟುಂಬಿಕ ವ್ಯವಸ್ತೆ ಹದಗೆಡಿಸುವ ಪದ್ದತಿಯಾದರೆ ಇನ್ನೊಂದಿಷ್ಟು ಮಂದಿಗೆ ವೈಯುಕ್ತಿಕ ಸ್ವಾತಂತ್ರ್ಯ ಒದಗಿಸಿಕೊಡುವ ಹೊಸ ಮಿನುಗು.

ಒಂದು ನಿರ್ದಿಷ್ಟ ಗಡಿಗಳಿಲ್ಲದೆ ಚಲಾವಣೆಯಾಗುವ ಸಂಪ್ರದಾಯ ಒಂದಿಷ್ಟು ಬದಲಾವಣೆಯನ್ನ ಒಳಗೆಳೆದುಕೊಂಡು , ಇನ್ನೊಂದಿಷ್ಟನ್ನ ವರ್ಜಿಸುವ ಅತಾರ್ಕಿಕ ನಿರ್ಧಾರಗಳೂ ಕೂಡ , ಒಂದು ತಲೆಮಾರು ಮತ್ತು ಒಂದಿಷ್ಟು ಜನರ ಹಿತ ಆಸಕ್ತಿಗೆ ಅನುಗುಣವಾಗಿ ವರ್ತಿಸುತ್ತಿದೆ ಅನಿಸಿದ ಕ್ಷಣವೇ ಅದು ಸೂಚಿಸುವ ಆದರ್ಶಗಳಿಗೆ ಮತ್ತೊಂದು ತಲೆಮಾರು ಅಸಮ್ಮತಿಯನ್ನ ತನಗೆ ತೋಚಿದ ರೀತಿಯಲ್ಲಿ ಹೊರಹಾಕುತ್ತದೆ.  ಬೇಕಂತಲೇ  ತನ್ನ ಸಂಸ್ಕೃತಿ ಒಪ್ಪದ   ಹುಡುಗರೊಟ್ಟಿಗೆ ಗಂಡುಬೀರಿಯಂತೆ ತಿರುಗುವ ಹುಡುಗಿ ಅಥವಾ  ಎಣ್ಣೆ ಕಮಟಿನಲ್ಲಿ ಜಾತಿ ಬಿಟ್ಟವಳೆನ್ದು  ಆ ಹುಡುಗಿಯರನ್ನು ಬೈಯುವ ಹುಡುಗ - ಇಬ್ಬರೂ ಇದರದ್ದೇ ಉತ್ಪನ್ನ.

ಬಹುಶಃ ಧರ್ಮವೂ ಕೂಡ ಶಂಕರಾಚಾರ್ಯರ ಒಂದು ಮಾತಿನಂತೆ " ಆ ಕ್ಷಣದ ಸತ್ಯ" ಅಷ್ಟೇ. ಕವಿ ಸಾಹಿರ್ನಂತೆ ಅದನ್ನ ಸಾರ್ವಕಾಲಿಕ ಮತ್ತು ಸಾರ್ವತ್ರಿಕ  ಆದರ್ಶ ಮಾಡಿಕೊಳ್ಳುವದು ಮೂರ್ಖತನ. ಅಷ್ಟಕ್ಕೂ ಹರ್ ಯುಗ್ ಮೇ ಬದಲ್ತೆ ರಹೇ
ಧರಮ್ ಕೋ ಕೈಸೆ ಆದರ್ಶ್  ಬನಾವೋಗಿ??!!

Wednesday, August 8, 2012

ಸಿಡಿಲು !!

ಸಿಡಿಲು !!...ಅದೊಂದು ಅದ್ಬುತ ಕೌತುಕಗಳ ಸಂಗಮ.ಶಕ್ತಿಯ ಸಂಕೇತ.ಪ್ರಕೃತಿಯ ರುದ್ರರಮಣೀಯತೆಯ ಚುಂಚು.ಅದು ಇಂದ್ರನ ವಜ್ರಾಯುಧ ಎಂದೂ ,...ಅಥವಾ ಅರ್ಜುನನಿಗೆ ಹೆದರುತ್ತದೆಂದೂ ಕೇಳಿದ್ದೇವೆ.
ಆದರೆ ಸಿಡಿಲಿನ ಉತ್ಪತ್ತಿ ಹೇಗೆ.ಸ್ವಲ್ಪ ವಿಜ್ಞಾನಿಕ ಪ್ರಶ್ನೆ.ಸಣ್ಣವನಿದ್ದಾಗ ಮೋಡ ಮೋಡಕ್ಕೆ ಡಿಕ್ಕಿ ಹೊಡೆದು ಸಿಡಿಲು ಬರುತ್ತದೆಂದು ನಂಬಿದ್ದೆ.ಆದರೆ ಮೋಡ ಕಲ್ಲಿನ ಹಾಗೆ ಗಟ್ಟಿ ಇರುವುದೇ ಇಲ್ಲವಲ್ಲ.ಇನ್ನೆಲ್ಲಿ ಡಿಕ್ಕಿಯ ಪ್ರಶ್ನೆ.ಸರಿ ಹಾಗಾದರೆ ಇನ್ನು ಹೇಗೆ?.ಮೋಡ ಅಂದರೆ ಅದು ತುಂಬಾ ಸಾಂದ್ರವಗಿರುವ ನೀರಿನ ಕಣಗಳು.ಆ ಸಾಂದ್ರತೆಯಲ್ಲಿ ಧನಾತ್ಮಕ ಅಣುಗಳು ಮೋಡದ ಮೆಲ್ಪದರದಲ್ಲೂ ಹಾಗೆ ಋಣಾತ್ಮಕ ಅಣುಗಳು (protons and electrons respectively) ಶೇಖರವಾಗುತ್ತದೆ.ಮೇಲೆ ಹಾಗುಗುತ್ತಿದ್ದ ಹಾಗೇ ಇತ್ತ ಭೂಮಿಯ ಮೇಲ್ಪದರಲ್ಲಿರುವ ಎಲ್ಲಾ ಧನಾತ್ಮಕ ಅಣುಗಳು ಒಂದೆಡೆ ಕೂಡಿಕೊಳ್ಳುತ್ತವೆ.(ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತಗೊಳೋದು ಪ್ರಕೃತಿಯ ಅಂತ್ಯಂತ ಸಹಜಾತಿಸಹಜ ಗುಣ).ಯಾವಾಗ ಧನಾತ್ಮಕ ಅಣುಗಳ ಸಾಂದ್ರತೆ ಮತ್ತು ಋಣಾತ್ಮಕ ಅಣುಗಳ ಆಕರ್ಷಣೆ ಭೂಮಿಯ ಗುರುತ್ವಾಕರ್ಷಣ ಬಲವನ್ನ ಮೀರುತ್ತದೋ ಆಗ ಒಂದು ಸುಲಭವೆನ್ನಿಸುವ ವಾಹಕದ ಮೂಲಕ ವಿದ್ಯುತ್ನ ರೂಪದಲ್ಲಿ ಆಕಾಶದೆಡೆಗೆ ಹರಿಯುತ್ತದೆ.(ಆಕಾಶದಿಂದ ಭೂಮಿಗೆ ಸಿಡಿಲು ಹೊಡೆಯುವುದಿಲ್ಲ).ಅದೇ ಸಿಡಿಲು.THUNDER

ಪ್ಲಸ್ಸು ಮೈನುಸ್ಸ್ ಕಡೆಗೆ ಆಕರ್ಷಿತವಾದಗೆಲ್ಲಾ thunderstorm ಗಳು ಇರೋದೆ ಅಲ್ವ

Sunday, August 5, 2012

ಮೊಟ್ಟೆಯಂತೆ ನಾವು

ಈ ಮೊಟ್ಟೆ ಇದಿಯಲ್ಲ.ಅದರ ಹೊರಕವಚ ಸುಣ್ಣದಿಂದ ಮಾಡಿದ್ದು. ಸುಣ್ಣ ಅಂದ್ರೆ ನಾವೆಲ್ಲ ಏನ್ ಅನ್ಕೊತಿವಿ?? ಗೋಡೆಗೆ ಹೊಡೆಯೋ ಸುಣ್ಣ ಅಥವಾ ಅದೇ ತರದ್ದು ಇನ್ನೆಷ್ಟು ಗಟ್ಟಿ ಇದ್ದೀತು ಅಂತ ಆಲ್ವಾ?
ಅದನ್ನ ನಾವು ಓಡಿಬೇಕಾದ್ರೆ ಅಡ್ಡ ಹಿಡ್ಕೊಂಡು ಓಡಿತಿವಿ.next ಟೈಮ್ ಅದನ್ನ ಉದ್ದ ಹಿಡ್ಕೊಂಡು ಮೊಟ್ಟೆಯ exact ನೆತ್ತಿಯ ಮೇಲೆ ಹೊಡೆದು ನೋಡಿ.ಮನುಷ್ಯನಿಗೇನು., ಆನೆಗೂ ಅದನ್ನ ಒಡೆಯಕ್ಕೆ ಆಗಲ್ವಂತೆ.

ಅಣ್ಣ ಹಜಾರೆ ಕುತ್ಕೊಂಡು ಜಪ್ಪಿದರೂ ಅಲ್ಲಾಡದ ನಮ್ಮ ಕೇಂದ್ರ ಸರ್ಕಾರದ ತಲೆ ಮುಂದೆ ಇದೆಲ್ಲ ಏನು ಅಲ್ವ ?? ಇರಲಿ.

ನಾವು ನಮ್ಮ ಜೀವನದ ಒಂದಲ್ಲ ಒಂದು ಭಾಗದಲ್ಲಿ , ನಂಗೆ ಅಷ್ಟೊಂದು ಸಾಮರ್ಥ್ಯ ಇಲ್ಲ ಅಂತ ಕೈ ಚೆಲ್ಲಿ ಕುತ್ಕೊಬಿಡ್ತೀವಿ ಅಲ್ವ. ನಾನು  ಅಷ್ಟು ದೊಡ್ಡ ಕಂಪನಿಯ ಸಂದರ್ಶನ ಎದುರಿಸಲಾರೆ ಅಂತಾನೋ , ಇಲ್ಲ ಆ ಪ್ರೇಮ ವೈಫಲ್ಯದಿಂದ ಹೊರಬರಲಾರೆ ಅಂತಾನೋ , ಒಟ್ಟಾರೆ ನಮ್ಮ ಆತ್ಮ ವಿಶ್ವಾಸದ ಪಿಲ್ಲರ್ಗಳು ಅಲ್ಲಾಡಿಬಿಟ್ಟಿರುತ್ತವೆ.ನಾವು ಕೂಡ ಮೊಟ್ಟೆಯ ಹೊರಕವಚದಂತೆ. ಸರಿಯಾದ ತರದಲ್ಲಿ ಸಮಸ್ಯೆಗಳನ್ನ ಎದುರಿಸಿದರೆ , ಎದ್ದು ನಿಂತರೆ ಆ ಎಲ್ಲ ಸೋಲಿಂದ ಹೊರಬರಬಹುದು.ಮಲಗಿದರೆ ಜಗತ್ತು ನಮ್ಮನ್ನ ಅಮ್ಲೆಟ್ ಮಾಡಿ ಬಿಡುತ್ತದೆ. ನಿಮ್ಮ ತಾಕತ್ತಿನ ಪರಿಚಯ ನಿಮಗಿರಲಿ.


ವಿಷಕನ್ಯೆ

ವಿಷಕನ್ಯೆ ಅಂತ ಬರತ್ತಲ ಭಾರತದ ಪುರಾಣ ಪುಣ್ಯ ಕಥೆಗಳಲ್ಲಿ .ಆ ವಿಷಕನ್ಯೆ ನೋಡೋದಿಕ್ಕೆ ಅದ್ಭುತವಾಗಿರ್ತಿದ್ಳಂತೆ ಅಥವಾ ಅದ್ಭುತವಗಿರೋರನ್ನೇ ವಿಷಕನ್ಯೆ ಮಾಡ್ತಿದ್ರು.ಏನು ಅಂತಂದ್ರೆ ರಾಜ ಮಹಾರಾಜರು ತಮ್ಮ ಎದುರಾಳಿಗಳನ್ನ ಕೊಲ್ಲೋಕೆ ಇವರನ್ನ ಕಳಿಸ್ತಿದ್ರು.ಇವರ ಜೊತೆಗೆ ಏನಾದರೂ ವಿರೋಧಿ ದೇಶದ ರಾಜ ಮಲಗಿದ ಅಂತಂದ್ರೆ ಆತ ಕತೆ ಮುಗಿಯಿತು.ಪ್ರಣಯದಾಟ ಮುಗಿಯುವ ಮುಂಚೆಯೇ ಈತನ ಇಹಲೋಕದಾಟ ಕೊನೆಗೊಂಡಿರುತ್ತಿತ್ತು.

ಸರಿ ಇವರು ವಿಷಕನ್ಯೆ ಹೇಗಾಗ್ತಿದ್ರು ಹಾಗಾದ್ರೆ. ಒಂದು ಸುಂದರವಾದ ಹೆಣ್ಣು ಹಸುಗೂಸನ್ನ ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದ ಪಾದಸರಸವನ್ನ ದೇಹಕ್ಕೆ ಕೊಡ್ತಿದ್ರಂತೆ(ಯಾವ ತರ ಅಂತ ಗೊತ್ತಿಲ್ಲ)( taken on recommendation of medical practitioner).ಅವರ ದೇಹ ಹಾಗಾಗಿ ವಿಷಪೂರಿತವಾಗುತ್ತಿತ್ತು.

ಕೊಲ್ಲೋಕೆ ಮನುಷ್ಯ ಎಂಥೆಂಥಾ ವಿಧಾನಗಳನ್ನ ಹುಡುಕ್ತಿದ್ದ ನೋಡಿ

Friday, August 3, 2012

ವೈದ್ಯೋ: ನಾರಾಯಣೋ ಹರಿ:

ಸಿಡುಬು ಗೊತ್ತಿರಬಹುದಲ್ಲ.ಇವಾಗೇನೂ ಔಷದಿ ಇದೆ ಅದಕ್ಕೆ ಸರಿ.ಆದರೆ ಬಹಳ ಹಿಂದೆ ಅದಕ್ಕೆ ಈ ತರಹದ ಔಷದಿ ಇರಲಿಲ್ಲ.ಅಮ್ಮ ..,,ದೇವಿ ಅಂತೆಲ್ಲ ಹರಕೆ ಹೊತ್ಕೊಂಡೆ ಹರ ಹರ ಅಂದು ಬಿಡೋರು.ಆದರೆ ನಮ್ಮ ವೈದ್ಯಪದ್ದತಿ ನಿಜಕ್ಕೂ ಅದೊಕ್ಕೊಂದು ಔಷದಿ ಹುಡುಕಲು ಒದ್ದಾಡಿತ್ತು.ಎಲ್ಲೂ ಅದರ ಬಗ್ಗೆ ಹೇಳುವುದಿಲ್ಲ ನಮ್ಮ ಪೂರ್ವಗ್ರಹಪೀಡಿತ ಶಿಕ್ಷಣ ವ್ಯವಸ್ಥೆ ಅಷ್ಟೇ.

ಸಿಡುಬು ಬಂದಿರತ್ತಲ್ಲ ಆ ಮನುಷ್ಯನ ಮೇಲೆ ಎದ್ದಿರತ್ತಲ್ಲ ಕೀವು ತುಂಬಿದ ಗುಳ್ಳೆಗಳು.., ಅದರಿಂದ ಕೀವು ತೆಗೆದು ಅದನ್ನ ಒಣಗಿಸಿ ಪುಡಿ ಮಾಡಿ ಅದನ್ನ ವೈದ್ಯರು ಸಂರಕ್ಷಿಸಿ ಇಟ್ಟುಕೊಂಡು ಹೊಸದಾಗಿ ಸಿಡುಬು ಬಂದ ವ್ಯಕ್ತಿಗೆ ಮೂಗಿನ ಮೂಲಕ ಊದುತ್ತಿದ್ದರಂತೆ.ಅದು ಪರಿಣಾಮಕಾರಿಯೂ ಆಗಿತ್ತೆಂದು ಉಲ್ಲೇಖವಿದೆ.

ವೈದ್ಯೋ: ನಾರಾಯಣೋ ಹರಿ: ಅಂತ ಯಾಕಂತಾರೆ ಅಂತ ಇವಾಗ ಗೂತ್ತಾಗ್ತಿದೆ ಅಲ್ವ ???

ಪಾರ್ಲಿಮೆಂಟ್!!

ಸಿಂಹಗಳಿರತ್ತಲ್ವ ಅವಕ್ಕೆ ಇಂಗ್ಲಿಷ್ನಲ್ಲಿ lions ಅಂತಾರೆ ಗೊತ್ತಲ್ಲ.ಅದೇ ಸಿಂಹಗಳ ಗುಂಪಿಗೆ ಏನಂತಾರೆ ಗೊತ್ತ "pride" ಅಂತಾರೆ.(pride of lions)

ಅದೇ ರೀತಿ ಗೂಬೆಗಳಿಗೆ ಇಂಗ್ಲಿಷ್ನಲ್ಲಿ owl ಅಂತಾರೆ ಅಲ್ವ. ಈ group of owl ಗೆ ಏನಂತಾರೆ ಗೊತ್ತ ಇಂಗ್ಲಿಷ್ನಲ್ಲಿ?????
.
.
.
.
.
.
.
.
"parliment"
doubt ಇದ್ರೆ google ಮಾಡಿ ನೋಡಿ
ಬ್ರಿಟಿಷರು ಕೊಟ್ಟು ಹೋದ ಉಡುಗೊರೆಗಳಲ್ಲಿ ಇದೂ ಒಂದು.

Tuesday, July 3, 2012

ಅದು ಎದೆಯೊಳಗಿನ ದನಿ ..

ಎರಡೂ ತೋಳುಗಳಲ್ಲಿ ನನ್ನೆರೆಡು ಸೊಸೆಯಂದಿರನ್ನ ಎತ್ತಿಕೊಂಡು ನಗುತ್ತಿದ ಅಮ್ಮ , ಅದೊಂದೇ ಶಾಶ್ವತ ಎನ್ನುವ ಸಂದೇಶ ಕೊಡುತ್ತಿದ್ದಾಳ ??. ಆ ಭಾವಚಿತ್ರ ನೋಡಿದಾಗಲೆಲ್ಲ ಮೂಡುವ ಚಿತ್ರಭಾವಗಳ ಮೆರವಣಿಗೆ ಯಾಕೋ ಕುಶಿಯದ್ದಲ್ಲ ಅನಿಸುತ್ತಿದೆ.
"ಅಪೀ ಯಾವಾಗ ಮನೆಗ್ ಬತ್ಯ " ಎಂಬ ಸದ್ದು ನಿಂತು ಎರಡುವರ್ಷಗಳ ಮೇಲಾದುವಲ್ಲ??!!. ಸದ್ದೇ ಇಲ್ಲದೆ ಎದೆಗೂಡಿನೊಳಗೆ ಹೊಕ್ಕುನಿಂತಿದ್ದ ಯಮರಾಕ್ಷಸ , ಕಲ್ಪಿಸಿಕೊಂಡೆ ಇಲ್ಲದಿದ್ದ ಅಮ್ಮನಿರದ ಜಗತ್ತನ್ನ ನಲವತ್ತೈದೆ ದಿವಸದಲ್ಲಿ ಕೊಟ್ಟಿದ್ದಷ್ಟೇ ಉಡುಗೊರೆ.

"ಎಂಟ್ ಗಂಟೆಯಾತು ಏಳಾ ಶ್ರೀಪಾದೂ"  ಎಂದು ಅಂದೆಬ್ಬಿಸುತ್ತಿದ್ದ ಅಮ್ಮನ ದ್ವನಿ ಇವತ್ತಿನ ನಿದ್ದೆ ಬರದ ರಾತ್ರಿಗಳಲ್ಲಿ ಯಾಕೋ ಅನುರಣಿಸುತ್ತಿದೆ.ನಿಂಗೆ ಚನಾಗಿ ಸಂಬಳ ಬಪ್ಪಲೆ ಹಿಡಿದ ಮೇಲೆ ನಾನೊಂದ್ ಸರ್ತಿ ನಾರ್ತ್ ಇಂಡಿಯ ಟೂರ್ ಹೊಗಿಬರಲಾ ಅಂತ ಕೇಳಿದ್ದ ಅಮ್ಮನ  ಅಪೇಕ್ಷೆ , ಎಂದಿದಿಗೂ ಅಪೇಕ್ಷೆಯಾಗೆ ಉಳಿಸಿದ್ದು ಮತ್ತೆಂದಿಗೂ ಪೂರೈಸಲಾಗದ ಅಪ್ಪಿಯಾಗೆ ನಾನುಳಿದು ಬಿಟ್ಟದ್ದು. ಎಲ್ಲವೂ ಆ ನಗುವಿನಲ್ಲೇ ಲೀನ.

ಅಮ್ಮನ ಅತೀ ಪ್ರೀತಿಯ ಗಡ್ಬಡ್., ಇಷ್ಟಪಟ್ಟು ತಂದು ತಿನ್ನುತ್ತಿದ್ದ ಕಲ್ಲಂಗಡಿ ಹಣ್ಣು , ಅಮಾ ನೋಡು ನಿನ್ನ ಮಗನ ಸಂಬಳದಿಂದ ತಂದದ್ದೆಂದು ಎದುರಿಗೆ ಕುಳಿತು ತಿನ್ನಿಸಲಾರದೆ ಹೋಗದ್ದು ಇವತ್ತು ನಗು ನೋಡಿದೊಡನೆ ದಿಗ್ಗನೆದ್ದು ಕಾಡಿಸುತ್ತಿದೆ. ಎಲ್ಲರ ಮಕ್ಕಳನ್ನ ಬರಗಿ ಮುದ್ದಾಡುತ್ತಿದ್ದ ಪ್ರೀತಿಯ ಅಜ್ಜಿ ಸ್ವಂತ ಮಗಳ-ಮಗಳನ್ನ ಸಂತೃಪ್ತಿಯಾಗುವಷ್ಟು ಮುದ್ದಾಡಲಾಗದಷ್ಟು ಕಮ್ಮಿ ಸಮಯ ಕೊಟ್ಟ ದೇವರ ಮೇಲೆ ಜಗಳ ಕಾದುಬಿಡುವ ಮನಸು.

ನನ್ನೆಲ್ಲ ಪ್ರೀತಿ ಸಿಟ್ಟು ಸ್ವಾಮ್ಯಭಾವ ಎಲ್ಲವನ್ನೂ ಧರಿಸಬಲ್ಲ ಆಕೆ ಮತ್ತೆಂದೂ ಬರಲಾರಳು.ಬ್ರೇಕ್ ಅಪ್ಪೇ ಆಗದ ಆ ಲವ್ವು  ಮತ್ತೊಂದಿರಲಾರದು .  ಮತ್ತಾರೂ ಕರೆಯದ ಆ ದ್ವನಿ ಇನ್ದೇಕೂ ನಿರಂತರ
"ಅಪೀ "

Monday, July 2, 2012

., . ಮಳೆ -ಕಾಲ

ಅರ್ಧಂಬರ್ದ ಮಳೆ ಬಂದು ನಿಂತ ನಮ್ಮೊರಿನ ಬಸ್ ಸ್ಟ್ಯಾಂಡ್ ಇಳಿದು  ನೋಡಿದಕೂಡಲೇ ಹಸಿರೆಲ್ಲ ಮೈಯಲ್ಲಿ  ಎಂತದೋ ರೋಮಾಂಚನ.ಬೆಂಗಳೂರಿನ  ಮಣ್ಣಿಗೆ ಅದರ ವಾಸನೆಗೆ ಅಲ್ಲಿನ ಪಿರಿ ಪಿರಿ ಮಳೆಗೆ  ಇಲ್ಲದ ಎಂತದೋ ಅದೃಶ್ಯ ಸೆಳೆತ ಈ ಬೆಳಗಿನ ಮಳೆಗೆ.ಮಳೆಯ ಹನಿ ಎದೆಯೊಳಗೆ ಇಳಿದು ತೊಯ್ದಂತ ಭಾವ.ಹಸಿ ಹಸಿರು ಮರಗಳ ಮಧ್ಯ ಕೊನೆಯೇ ಇಲ್ಲದೆ ಚಳಿಗೆ ಹೊದೆದು ಮಲಗಿಬಿಟ್ಟಿರುವ ನೀಲಿ ನೀಲಿ ರೋಡು.

ಅಖಂಡ ಇಪ್ಪತ್ತು ವರ್ಷಗಳ ಕಾಲ ಇದೆ ಮಳೆಯ , ಇದೆ ಕೆಸರಿನ ತೊಯ್ದೂ ತೊಯ್ಯದ ಕೊಡೆಯ ಸೂಡಿನ ನಡುವೆಯೂ ನೆಡೆದು ಬದುಕ ಕಂಡಿದ್ದರೂ ಎಂದೂ ಆಗದ ಅನುಭವ ಖಾಲಿ ಕೇವಲ ೨ ವರ್ಷಗಳ ಬೆಂಗಳೂರಿನ ಬದುಕು ನಮ್ಮ ದೃಷ್ಟಿಕೋನದ ದಿಕ್ಕನ್ನೇ ಬದಲಿಸಿಬಿಡುವ ವಿಸ್ಮಯದ ಬಗ್ಗೆ ಸಣ್ಣ ನಗು

ಇಷ್ಟಿಷ್ಟು ದುಡ್ಡು ಕೊಟ್ಟು ಬದುಕ ಕಟ್ಟುವ ಬೆಂಗಳೂರಿನ ಬಗೆಗೆ ಅನಿವಾರ್ಯ ಮೆಚ್ಚಿಗೆ ಜೊತೆ ಜೊತೆಗೆ ., ಮೈ ಮನವ ತಂಪು ಮಾಡುವುದು ಕೇವಲ ಹುಡುಗಿಯರ  ಅರ್ಧ ಮುಕ್ಕಾಲು ಮಿಡಿಗಳಷ್ಟೇ ಎಂಬಷ್ಟರ ಮಟ್ಟಿಗೆ ಸಂವೇದನೆ ಹಳ್ಳ ಹತ್ತಿಸಿದ ಊರಿನ ಮೇಲೆ ತಾತ್ಸಾರ ಬೇರೆ.

ಮನೆ ಬಂತು. ಇನ್ನೊಂದಿಷ್ಟು  ನೆನಪಿನೊಂದಿಗೆ .ಚಂದನಳ ಶ್ರೀಪದಕಕ್ಕ ಬಂದಾ ಎಂಬ ಕೂಗಿನೊಂದಿಗೆ.


Monday, May 14, 2012

ಚಿಲ್ಲರೆ ಕವನಗಳು

ಕಳೆದುಹೊಗಲೊಮ್ಮೆ ನಾನು ಅವಳ ಕಣ್ಣ ಕಾಡಿಗೆ !!
ರಕ್ತ ಚಿಮ್ಮಲೆಂದು ಕುಳಿತ ಆ ಕಪೋಲವೆನ್ನ ದಂತಕೆ??

ಹುಬ್ಬಿಗುಬ್ಬ ಸೇರಿಸಿಟ್ಟು ಹಣಾಹಣಿಗೆ ಸಿದ್ದವೇ ??
ಚಳಿಗಾಲ ಬೆಚ್ಚಗೆಂದು ಸಮ್ಮತಿಸಲು ಪಂದ್ಯವೇ !!

ನಾಲಿಗೆಗಳ  ಯುದ್ದಕೆ ನಾಸಿಕವದು ಅಡ್ಡಿಯೇ??
ಅಧರ ಮಧುರ ಸ್ಪರ್ಶಪದರ  ಮುಂದಿನದಕೆ ಒಸಗೆಯೇ !!

ಮುರಿದ ಕುರುಳು ಅಡ್ಡ ಬರಲು ಕುತ್ತಿಗೆಗೆ ಶಿಕ್ಷೆಯೇ
ಕತ್ತೆತ್ತಿ ನೋಡಿದೊಡನೆ ಬಿತ್ತೆ ದಂತ ಮುದ್ರಿಕೆ ??

ಕಾಡಿನೊಳಗೆ ಹೋದ ಮುಗುದ ಹಣೆಯಚಂದ್ರನಳಿಸಿದ
ಕಾಮದೊಡಲ ಬುಟ್ಟಿಯಿಂದ ಪ್ರೇಮಚಂದ್ರ ಉದಿಸಿದ :)

Wednesday, May 2, 2012

ಎದೆಯ ಡೈರಿಯ ...........................೨

ಪೆನ್ನಿನ ಹೊಟ್ಟೆಯೊಳಗಿಂದ ರಕ್ತವನ್ನ ಬಸಿದು ಅಕ್ಷರಕ್ಕೆ ಬಲಿಕೊಡುವಾಗಲೇ ಅವನ ನೆನಪಾಗಬೇಕೆ.ಕಾಮವನ್ನ  ಪ್ರಜ್ಞೆ ಗೆದ್ದ ವಾಸ್ತವದ  ಬಸಿರನ್ನ ಒಪ್ಪಿಕೊಳ್ಳಲಾಗದೆ  ಹೋದನೆ.
"ರಂಗಮ್ಮಾ ., ಒಂದ್ ಟೀ" .
ಕೆಲಸದವರೂ ಎಲ್ ಹಾಳಾಗಿ ಹೋಗಿದಾರೋ.ತಲೆ ಸಿಡಿಯುತ್ತಿದೆ. ಬಾಂಬ್ ನಿರೋಧಕ ತಜ್ಞರನ್ನ ತಲೆ ಒಳಗೆ ಕಳಿಸಬೇಕು.ಜನುಮ ಜನಮಕ್ಕೂ ನೀನೆ ಬೇಕು ಎಂಬ ಆತ್ಮವಂಚನೆಯ ಮಾತನ್ನ ಆಡಲಾರದ್ದೆ  ಹೋಗಿದ್ದೆ ತಪ್ಪಾಗಿ ಹೋಯಿತೇ??.ಪ್ರೀತಿಯ ಪೋಷಾಕಿನಲ್ಲಿ ಅಹಂಕಾರಕ್ಕೊಂದಿಷ್ಟು ಆಹಾರವಾಗುವ, ಪತ್ನಿಶೇಷವೇ ಪ್ರೀತಿಯ ಸಂಕೇತವೆಂದುಕೊಳ್ಳುತ್ತ ಸಾಗುವ ಭಾವಹಾದರಕ್ಕೆ ಒಪ್ಪದ್ದು ನೈತಿಕತೆಯೇ.ಹಾಳು ಯೋಚನೆ.ಸಿಗರೇಟೆ ಉತ್ತಮ.ಬೇಕೆಂದಾಗ ದಕ್ಕುತ್ತದೆ.
ಆತ ಬಿಟ್ಟು ನಡೆದರೂ ಆತನ ನೆನಪುಗಳು ಅಂಟಿಕೊಂಡುಬಿಟ್ಟಿವೆ. ಸೀದು ಹೋದ ಸಿಹಿ ತಿಂಡಿಯ ಪಾತ್ರೆಯ ತಳದಂತೆ.
ಯಾವುದೂ ಅನಿವಾರ್ಯವಲ್ಲದಂತೆ ಬದುಕಿಬಿಡಬೇಕು.ಮನಸ್ಸಿನ ಲಗಾಮು ಹರಿದು ಹಾರುತ್ತಿದ್ದ ಕಾಮಕುದುರೆಗೆ ಜಾಕಿ ಅಷ್ಟೇ ಅವನು.ಇಷ್ಟೇಕೆ ತಲೆಬಿಸಿ ಅವನ ಬಗ್ಗೆ.ಬಟ್ಟೆ ತುಂಡುಗಳ  ಹಿಡಿದು ಹೊಲಿಗೆ ಯಂತ್ರದ ಮೇಲಿಟ್ಟು ತರರರ್ ಎಂದು ಹೊಲಿಗೆ ಹಾಕುವ ಪರಿಯೇ ಈ ಸಂಬಂಧ.ಅವನಿಗಿಷ್ಟವಿಲ್ಲವೆಂದು ಮಿನಿ ಹಾಕದ  ನಾನು , ನನಿಗಿಷ್ಟವಿಲ್ಲವೆಂದು ಮೀಸೆ ಬಿಡದ  ಅವನು. ಹಹ್,ವ್ಯಾಪಾರ.
ಟ್ರಿನ್ ಟ್ರಿನ್
"ಹಲೋ"
" ಹಾಯ್ , ನಾನು ನಿಮ್ಮ ಕೋ ಅರ್ಡಿನೆಟರ್"
"ಹಾ, ಹೇಳಿ"
"ಪ್ರಾಜೆಕ್ಟ್ ಬಗ್ಗೆ ಮಾತನಾಡಬೇಕಿತ್ತು., ನೀವಿವತ್ತು ಬಂದಿಲ್ಲವೆಂದು ಗೊತ್ತಾಯ್ತು"
"ಸರಿ ಮನೆಗೆ ಬನ್ನಿ , ಕಾಫಿ ಕುಡಿಯುತ್ತ ಮಾತನಾಡುವ"
"ಸರಿ, ಬೈ"  
ಬೀರು ಮುಂದೆ ನಿಂತು , ಇವನಿಗೆ ಲೈಟ್ ಬ್ಲೂ ಅಂದ್ರೆ ಇಷ್ಟವಲ್ಲವಾ ಅಂದುಕೊಂಡಳು.

Monday, April 30, 2012

ಎದೆಯ ಡೈರಿಗೆ ಪುಟಗಳುಂಟೆ

ಬದುಕನ್ನ  ಅಲ್ಲಿನ್ದಿಲ್ಲಿವರೆಗೂ ಮಗುಚಿ ಹಾಕುವುದು, ಖಾಲಿ ಒಂದು ತಿರುವು. ಹುಬ್ಬಿನದೋ ಸೊಂಟದ್ದೋ  ಅಥವಾ ಈ ದರಿದ್ರ ದಾರಿಯದ್ದೋ  ಆವುದೋ ಒಂದು ."ಎಲ್ಲಿಗ್ರೀ ಟಿಕೇಟು" , ಈ ಕಂಡಕ್ಟರನ  ಗೊಗ್ಗರು ದ್ವನಿಗೆ ಬಳ್ಳಾರಿ ಅದಿರು  ತುಮ್ಬಿಬಿಡಬೇಕು. "ಕೊಡಿ , ನಮ್ಮೂರಿಗೊಂದು". ನಮ್ಮೂರು ಯಾವುದೆಂದು ಈ ಪಾಪದ ಕಂಡಕ್ಟರಿಗೆ ಗೊತ್ತಿರಲು ನಾನಾವ ಗಿಡದ ತೊಪ್ಪಲು. " ಕೊಪ್ಪಲಿಗೆ ಕೊಡಿ".

ಓ ಅಲ್ಲಿ , ಕರಿ ಸೀರೆಯೊಂದಿಗೆ ನಿಂತಿರುವ ಹುಡುಗಿ ನನ್ನ ಪಕ್ಕದಲ್ಲಾದರೂ ಕೂರಬಹುದಿತ್ತು. ಈ ಮಳೆಯಲ್ಲದ ಮಳೆಯಲ್ಲಿ ಯಾವುದಾದರೂ ಮುರುವಿನಲ್ಲಿ  ಭುಜಕ್ಕೆ ಭುಜ ತಾಕಿ ನನ್ನ ಬದುಕೂ ಮಗುಚಿಕೊಳ್ಳುತ್ತಿತ್ತೇನೋ.ತತ್ ಭುಜದ ಮೇಲೆ ಕತ್ತು ಮುರಿದ ಕೋಳಿಯಂತೆ ಮಗುಚಿಕೊಳ್ಳುತ್ತಿರುವ ಈ ಮುದುಕನೋ ಆತನ ತಲೆಯೋ .,ಇಲ್ಲೂ ಅದೃಷ್ಟವಿಲ್ಲ.ಆಕೆ ಅಲ್ಲ್ಯಾರದ್ದೋ ಪಕ್ಕ ಕುಳಿತಾಯಿತು.ನೋಡು ಹುಡುಗನ ಪಕ್ಕ ಹೇಗೆ ಕೂರುತ್ತಾಳೆ .ಛೆ ಸಂಸ್ಕಾರವಿಲ್ಲ.ಆಕೆಯೂ ಹಾಗೆ ಅಲ್ಲವೇ ಭಿಡೆ ಇಲ್ಲದೆ ಒರಗಿಕೊಳ್ಳುತ್ತಿದ್ದಳು.ನನಗೂ ಮಹಾನ್ ಸುಬುಗನೆನ್ನಿಸಿಕೊಳ್ಳುವ ಚಟ.ಏನೂ ತಪ್ಪು ನೆಡಸದೆ ತಪ್ಪು ಮಾಡಿಬಿಟ್ಟೆ.ಆಆಆ , ಏನು ತಿರುವು .,ಕೊಂಚವೂ ನಿಧಾನಿಸದೇ ತಿರುಗಿಸುತ್ತಾನೆ.ಡ್ರೈವೆರ್ ತಲೆ ಕುಟ್ಟಿಬಿಡಬೇಕು.

ಅಲ್ಲ ,ಜೀವನದಲ್ಲಿ ಯಾವುದೂ ಅನಿವಾರ್ಯವಲ್ಲವಂತೆ, ಹಾಗೆಲ್ಲ ಬದುಕಲು ಸಾಧ್ಯವೇ.ನನ್ನ ಹತ್ತಿರ ತಿಂಡಿ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದಾಗ ಇಡೀ ಮನೆಗೆ ಮನೆ ಸೂರು ಹಾರುವಂತೆ ನಕ್ಕಿದ್ದಳಲ್ಲ.ಅವಾಗಲೂ ಸಿಗರೇಟಿನ ವಾಸನೆ,ತತ್.ನನ್ನ ಬಿಡುತ್ತಿಯ , ಅದು  ಹಾಗಿರಲಿ ಸಿಗರೇಟೆ ಬಿಡಲಾಗದು ನಿನ ಕೈಲಿ ಮಂಕು.ಸಿಗರೆಟಿದ್ದದ್ದು ಕೈಯಲ್ಲಿ , ಹೊಗೆ ಬಂದದ್ದು ಅವಳ ಕಣ್ಣಲ್ಲಿ.ಅವತ್ತು ಎದೆ ಮೇಲೆ ಸಿಗರೆಟಿಟ್ಟು ಆರಿಸಿದವಳು , ಮತ್ತೆ ಮುಟ್ಟಿಲ್ಲ.ಅಸ್ಪರ್ಷ್ಯ.ಪ್ಯಾಕ್ಕಲ್ಲಿ ಸಿಗರೇಟು ಉಂಟೆ, ಮುಂದಿನ ಸ್ಟಾಪ್ನಲ್ಲಾದರೂ ನೆನಪು ಮಾಡಿ ತೆಗೆದುಕೊಳ್ಳಬೇಕು."ಕೊಪ್ಪಲಿ ಕೊಪ್ಪಲಿ ಕೊಪ್ಪಲಿ" ಈ ಕ್ಲೀನರ್ ಗೆ ಕನ್ನಡ ಮಾಷ್ಟರು ಅರಿದ್ದಿರಬಹುದು.ಏನಾದರಾಗಲಿ ಬಲಗಾಲಿಟ್ಟು ಇಳಿದು ಬಿಡುವೆ.

ತಾರ್ಕಿಕವಾಗಿ , ಸುಟ್ಟು ಇಂಗ್ಲಿಷ್ ನಲ್ಲಿ ಆಕೆ ಹೇಳುವ ಹಾಗೆ , technically   ಮಾಡಿದ್ದು ಸರಿ ಅಂತೆ. ಅಲ ಈ ತರ್ಕಕ್ಕೂ  ಭಾವನೆಗೂ ಏನಾದರು ಲಿಂಕ್ ಉಂಟೆ.ತಾರ್ಕಿಕವಾಗಿ ಸರಿ ಎಂದು ಸಾಧಿಸಬಿಡಬಹುದಾಗಿದ್ದು ಭಾವನೆಗಳ ಲಂಗೋಟಿ ಬಿಚ್ಚಿ ನೆಡೆದುಬಿಡಬಹುದಲ್ಲವ.ಆಕೆಯ ಸಿಗರೆಟಿನಂತೆಯೇ ಆಕೆಯ ಯೋಚನೆಗಳು.ಸುಡುತ್ತವೆ.ಆರೋಗ್ಯಕ್ಕೆ ಹಾನಿಕರ.

ನಡೆದ ಹೆಜ್ಜೆ ಎಷ್ಟಾಗಿರಬಹುದು.ನನ್ನ ತಲೆ ನನಗೇ ಪ್ರಶ್ನೆ ಕೇಳುವಂತಾಯಿತು,ಆಕೆಯ ಜೊತೆಗೋ ಇಲ್ಲ ಈ ಹಾಳು ಬಸ್ ಇಳಿದ ನಂತರವೋ??.ಮೆದುಳಲ್ಲೂ ಎರಡು  ಭಾಗವಂತೆ!!.ಮನೆ ಹಂಚು ಒಡೆದು ಸೋರುತ್ತಿದೆ ಸರಿ ಮಾಡಿಬಿಡಬೇಕು.
ಅರೆ ಆ ಕರಿ ಸೀರೆ ಇಲ್ಲೇ ಇಳಿಯಿತೇ.ಗಮನಿಸಲೇ ಇಲ್ಲ.ಸ್ವಲ್ಪ ಹೆಜ್ಜೆ ಕಮ್ಮಿ ಮಾಡಬೇಕು.ಏನಾದರಾಗಲಿ ಕೇಳಿಬಿಡಬೇಕು.ಬ್ಲೌಸಿಗೆ ಪಿನ್ನು ಚುಚ್ಚಿದೆಯೋ  ಇಲ್ಲವೋ ಅಂತ. ಹಾಕಿದ ಕವಳದ  ಸಿಕ್ಕಿ ಕೊಂಡುಬಿಟ್ಟಿದೆ.ಬಹುಶಃ ಜೊತೆಗೆ ಕರೀ ಸೀರೆ ಕೂಡ.













Friday, April 27, 2012

ಉಪಾಂಶು

ಮುಚ್ಚಿಟ್ಟದ್ದು ಯಾಕೆಂದು ಗೆಳತಿ ಕೇಳಿದಾಗ
ನೆನಪಾಯಿತು ಅಡೆಹಾಕಿದ್ದು
ಹಣ್ಣಾಗಿದೆಯೆಂದು!!

ಹಣ್ಣು  ಅಷ್ಟೆಲ್ಲ ಸಿಹಿಹೇಗಾಯಿತು?!
ಗೋಣಿಚೀಲದಡಿಯಲ್ಲಿ ಅಡಗಿಸಿಟ್ಟು
ಮಾಗಿಸಿದ್ದಕ್ಕಿರಬೇಕು

ನನ್ನಮ್ಮನೂ ತುಂಬಾ ಸಿಹಿ ಸಿಹಿ
ಕನಸುಗಳ ಬಚ್ಚಿಟ್ಟು  ಕೊಂಡಿದ್ದಳೇ??

ಪೆದ್ದು ಮನಸು ಗೊತ್ತಾಗಲಾರದು
ಮಾಗಲು ಮಾವೇ ಬೇಕು ಬೇವಲ್ಲ!

Monday, April 9, 2012

ನನ್ನೊಡತಿ ನೀನು

ಮೃಗವಾಗಿ ಖಗವಾಗಿ , ಬಂದು ಎರಗುವ ಸುನಾಮಿಯಾಗಿ ,
ಭೋರ್ಗರೆಯುವ ಕಡಲಾಗಿ ನಿನ್ನೊಡನೆ ಕಾದಾಡಿದರೂ
ಎನ್ನ ಧರಿಸುವ ಅವನಿ ನೀನು.

ಎನ್ನೊಡಲ ಸ್ಖಲಿತ ಭಾವಗಳ ,ಫಲಿತ ಹಣ್ಣುಗಳ
ರುಚಿ ನೋಡುವ ಹೆಣ್ಣು ನೀನು :)

ಬರಡಾಗಿ , ಮಳೆಯಾಗಿ ನಾ ಭಾವದತಿವೃಷ್ಟಿ.
ಉಬ್ಬರಿಸಿ ಅಬ್ಬರಿಸಿ ನಿನ್ನದೆಯ ಗುದ್ದಿದರು
ಎನ್ನ ಧರಿಸುವ ಸಾಗರಿಕೆ ನೀನು

ನನ್ನದಿಯ ನಡುಮನೆಯ ತಡಿಮಡಕೆಯೊಡೆದು
ಕದ್ದು ಹೀರುವ ಅಳಿನಿ ನೀನು :)

ನನ್ನೊಡತಿ ನೀನು :)

Sunday, January 29, 2012

ಜೀವನದಿ!

ಗಂಗೆಯಾಗಿ ಬಿಡಬೇಕು !!

ನಿನ್ನೆದೆಯ  ಗೋಪುರದಿ ನನ್ನೆಲ್ಲ ಪ್ರಜ್ಞೆಗಳ ಕಳಚಿ
ತೊನೆದು ತೊಳೆದು ಭೋರ್ಗರೆಯುವ ಅಲಕನಂದೆಯಂತೆ.

ನಿರ್ಜೀವ ದೇಹ ದಾಹವಿಲ್ಲದೆ ಮುಳು ಮುಳುಮುಳುಗಿ ಏಳುವಾಗ
ಸಂಬಂಧಗಳ ನೆನಪು ಭಸ್ಮದ ಹೆಸರು ಹೊತ್ತು ತೊಳೆದಳಿದು ಹೋಗುವಂತೆ
ನಾ  ನಿನ್ನರಿವ ಅಸ್ಮಿತೆ ಕುಡಿದು ಗಮಿಸುವ ಮನ್ದಾಕಿನಿಯಾಗಿಬಿಡಬೇಕು.

ದಿಕ್ಕೆಡಿಸಿ ಸೇರುವ ಆ ಭಾವ ಗಂಡಕಿ , ಬಿಕ್ಕಳಿಸಿ ಬಿಕ್ಕಳಿಸಿ ನಾ ಲೋಚನವಾರಿ
ವಯ್ಯಾರಿಯಾಗಿ, ನಾ ಭಾಗಿಯಾಗಿ ,ಕುಡಿದು ತುಪ್ಪಿದ ಜಾನುವಿಗೆ ನಾನೆಂಜಲಾಗಿ
ನನ್ನರುವಿನೊಳಗೆ ನೀ ಸಹನವಾಗಿ  ,ಎಲ್ಲ ಮರೆತು ಹರಿಯುವ ಜಾಹ್ನವಿಯಂತೆ

ಪಾಪ  ತೊಳೆಯುವ, ಪಾಪಿಯಾಗದ , ಶಂತನುವರಿಯದ ಗಂಗೆಯಂತೆ
ಎಲ್ಲ ಕೊಳಕಿನೊಳಗಿಂದ ಎದ್ದು ಬರುವ ದೇವನದಿಯಾಗಬೇಕು.