Monday, June 13, 2011

ತಲ್ಲಣಿಸದಿರು ಕಂಡ್ಯ ತಾಳು ಮನವೆ..............

ಆತ್ಮೀಯ .,

ನಮ್ಮ ಅತೃಪ್ತಿ ಮತ್ತು ಮಿತಿಗಳು ನಮಗೆ ಕಾಣುವುದಕ್ಕೆ ಶುರುವಾಗುವುದು ನಮ್ಮೆದುರು ಆ ಕೊರತೆ ಇಲ್ಲದವರು ನಿಂತಾಗ.ಅಂಥದೊ ಮಂಕು ಸಿಟ್ಟು ಬೇಜಾರು ,ನಮ್ಮ ಖುಷಿಯ ಸಂತೋಷದ  ಒಂದಷ್ಟು ಕ್ಷಣಗಳನ್ನ  ಯಾರೋ ನಮ್ಮಿಂದ ಕಿತ್ತುಕೊಂಡು ಬಿಟ್ಟರು ಅನ್ನುವ ಸಿಟ್ಟು.ಈ ದುಗುಡ ಶಾಂತ ಆಗೋದು ಮತ್ತೆ ಅಮ್ಮ ನೆನಪಾಗಿ ,ಹಪ್ಪಳ ಉಪ್ಪಿನಕಾಯಿ ಮಾಡುವುದರಲ್ಲೇ ಖುಷಿ ಕಾಣುವ ಅಮ್ಮ .ಅಜ್ಜಿ.ಇದನ್ನೆಲ್ಲಾ ದಾಟುವುದಕ್ಕೆ ಸಾದ್ಯವಿದ್ದೂ ದಾಟದ ,.ಇಂತದ್ದಕ್ಕೆಲ್ಲ ಹೊಂದಿಕೊಳ್ಳಲಾಗದೆ ಮೀರುವ ದಾರಿಯೂ ಗೊತ್ತಿಲ್ಲದೇ ಒದ್ದಾಡುವ ನೆಂಟರಿಷ್ಟರು  ಇವರೆಲ್ಲ ನೆನಪಾದಾಗ .ದಿನನಿತ್ಯದ ಅಗತ್ಯಗಳಿಗೆ ಬಲವಂತದ ಕಡಿವಾಣ ಹಾಕಿ ಕೇಳಿದಾಗ ದುಡ್ಡು ಕೊಡುವ ಅಪ್ಪ ನೆನಪಾದಾಗ.
ಅದರೂ
ಏನೋ ಕಹಿ ಏನೋ ಕೊಸರು ಒಳಗೊಳಗೆ ವಿಷವಾಗಿಬಿಡುವ ಭಯ.
ಎಲ್ಲರೂ ಕ್ಯಾಮೆರಾ ಇರುವ ಮೊಬೈಲ್ ತಗೊಂಡಾಗ ., ಕೈಲ್ಲಿ ಸೆಲ್ಲೆ ಇಲ್ಲದ ನಾವು ಕಿಳರಿಮೆಯಿಂದ ನರಳುವಾಗ ,ಅದನ್ನೇ ಬೇರೆಯವರು ಎತ್ತಿ ಆಡಿದಾಗ  ಯಾಕೋ ಅಳು ಬಂದು ಬಿಡ್ತದೆ.ಛೆ ಯಾವಾಗ ಇದೆಲ್ಲ ಮುಗಿಯುತ್ತದೆ.ನನ್ ಹತ್ರ ಯಾರೂ ಹೊಸ ಸಿನಿಮ ಬಗ್ಗೆ ಕೇಳಲ್ಲ.ಹೊಸ ಫ್ಯಾಶನ್ ಬಗ್ಗೆ ಮಾತಾಡಲ್ಲ.ಬೇರೆ ಹುಡುಗಿಯರ ಜೊತೆ ಮಾತನಾಡುವ ಹಾಗೆ ಮಾತಾಡಲ್ಲ.ಹೇಗೆ ಇದನ್ನೆಲ್ಲಾ ನಿನಗೆ ಮೀರುವುದಕ್ಕೆ (?!) ಸಾದ್ಯವಾಯಿತು  ಅಂತೆಲ್ಲ ಕೇಳ್ತಾರೆ.ಯಾಕೆ ನಿನಗೆ ಬೇರೆ ಹುಡುಗಿಯರ ತರಹ ಆಕರ್ಷಕವಾಗಿ ಡ್ರೆಸ್ ಮಾಡಿ ಮಿಂಚಬೇಕು ಅನ್ಸಲ್ಲ ಅಂತ ಕೇಳ್ತಾರೆ.ಹೇಗೆ ಹೇಳಲಿ ಅದೆಲ್ಲ ನಾನು  ಆಯ್ಕೆ ಮಾಡಿಕೊಂಡದ್ದು ಅಲ್ಲ ಅಂತ. ಒದಗಿ ಬಂದದ್ದು ಅಂತ.

ಹೇಳಿಕೊಳ್ಳದಿದ್ದರೆ ವಿಷವಾಗಿಬಿಡುವ ಭಯ., ಹೇಳಿಕೊಂಡರೆ ಖಾಸಗಿತನವೆಲ್ಲ ಕಳೆದುಕೊಂಡು ಕಾಲಿ ಕಾಲಿ ಅದಂತೆ.

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲುಹುವನು ಇದಕೆ ಸಂಶಯವಿಲ್ಲ.........


ಯಾಕೋ ಎಲ್ಲ ಜಾಳು ಜಾಳು ಪದಗಳೆನ್ನಿಸುತ್ತಿದೆ.ನಿನ್ನ ನೆನಪೊಂದು ಬಿಟ್ಟು .



ಪ್ರೀತಿಯಿಂದ

2 comments:

  1. ಚೆನ್ನಾಗಿದ್ದೊ............ :)

    ReplyDelete
  2. opkyalaku agdhe, ille annakku agde, namma asahayakathege naave shaapa kagtha kalidu hogtha iro e dinagalu yavaga nammindha dura agtho antha kaytha kuthirthya... thumba chandha iddu...

    ReplyDelete