Sunday, May 15, 2011

ದೇವರು-೨

ಮೂರ್ ಮನೆ ಸುಬ್ಬುವಿನ ಮನೆಯ ಮೆತ್ತಿಯ ಮೇಲ್ಗಡೆ ಇಸ್ಪೀಟ್ ಆಡುತ್ತ ವೆಂಕಪ್ಪ ಮಾತಿಗೆ ಶುರುವಿಟ್ಟ."ಅಲ ಈ ದೇವಸ್ಥಾನ ಅಂದ್ರೆ ಸುಮ್ಮನೆಯಾ.,ಪೂಜೆ ಮಾಡಲೇ ಭಟ್ರು  ಬೇಕು ದೇವಸ್ತಾನಕ್ಕೆ ಅಂತ ಜಾಗ ಬೇಕು.,ನಡೆಸಿಕೊಂಡು ಹೊಪರೊಬ್ರು ಬೇಕು.,ಹರ ಹರ ಅನ್ನೋ ಮುದಕಂಗೆ ತಣ್ಣಗೆ ಇಪ್ಪಲೇ ಅಗದಿಲ್ಲವ, ತಗಳ ಆಟೀನ್ ರಾಣಿ" ರಪ್ಪನೆ ವಾಲೆಯ ವಗದು ಹೇಳಿದ. ರಾಮಾನಂದ  ಕಣ್ಣು ಕಿರಿದು ಮಾಡಿ " ನಂಗ ಬ್ರಾಹ್ಮಣರು.,ದೇವರು ನಮಗೆ ತಾತ್ವಿಕವಾಗಿಯೂ ವ್ಯಾವಹಾರಿಕವಾಗಿಯೂ ಒಂದು ನೆಲೆ ಒದಗಿಸಿ ಕೊಟ್ಟಿದ್ದ.ಜನ ಮರ್ಯಾದೆ ನಮಗೆ ಏನಕ್ಕೆ ಕೊಡ್ತಾ ಇದ್ದ ದುಡ್ಡಿದ್ದು ಹೇಳ ?? .ಇತರ ಜನಾಂಗದ ಮುಂದೆ ಊರಿಗೊಂದು ಮರ್ಯಾದೆ ಇರ್ಲಿ ವೆಂಕ.ದೇವಸ್ಥಾನ ಸಯ್ಯಲ ಕಟ್ಟಿರಾತು.ಒಂಚೂರು ಹೆಚ್ಚುಕಮ್ಮಿ ಆದರೆ ದೇವರೇನು ತಕರಾರು ಮಾಡದಿಲ್ಲೆ".ಸಿದ್ದಜ್ಜನಿಗೆ ಗಿರಿಗೆ ಯಾಕೋ ಮಾತು ಸರಿ ಎನಿಸಿತು.ಅಷ್ಟಕ್ಕೂ ದೀಪಾವಳಿಯಂದು ಇತರ ಜನಾಂಗದವರು ಚೌಡಿಕಟ್ಟೆಯಾ ಮುಂದೆ ತೋರುವ ಭಕ್ತಿಯ ರುದ್ರನರ್ತನ ಎಲ್ಲರ ಕಣ್ಣಿಗೆ ಕಟ್ಟಿದ್ದೆ ಅಲ್ಲವೇ.

ವೆಂಕಪ್ಪನಿಗೆ ಯಾಕೋ ಇರಿಸಿನ್ನು ಹೋದ ಹಾಗೆ ಕಾಣಲಿಲ್ಲ."ಬ್ಯಾಡದೋ ರಾಮಾನಂದ.,ನಿಂಗೆ ಗೊತಾಗ್ತಲ್ಲೇ ಮಾರಾಯ.ಆ ವರಾಡ ದೀಪಕಾಣಿಕೆ ಕಾರ್ತಿಕ ಹೇಳಿ ಸುಮ್ನೆ ದುಡ್ಡು ದಂಡ ಮಾರಾಯ".ಒಳಮನಸ್ಸಿನ ನಿಜ ಬೇಗುದಿಯನ್ನ ತೆರೆದಿಟ್ಟ.ಮರುಕ್ಷಣವೇ ತಾನೆಕೋ ತುಚ್ಛವಾಗಿ ಮಾತನಾಡಿದೆ ಎಂದೆನಿಸಿ ಮಾತು ಕಮಚಿ " ನಿಂಗ ಎಲ್ಲ ಹೆಂಗೆ ಹೇಳ್ತ್ರೋ ಹಂಗೆ" ಎಂದ.ಇಸ್ಪೀಟು ಅಷ್ಟು ಹೊತ್ತಿಗಾಗಲೇ ತನ್ನ ಬಣ್ಣ ಕಳೆದು ಕೊಂಡಿತ್ತೆನಿಸಿತು.ತಣ್ಣಗೆ ಗುಡುಗಿದ ಶಬ್ದ ಕೇಳಿ "ಅರ್ಜುನ ಪಲ್ಗುಣ ಪಾರ್ಥಾ....." ಎಂದೇನೂ ಗುನುಗುತ್ತ ವೆಂಕಪ್ಪ ಎದ್ದು ಹೊರಟ.

                                                                       --------------------------------------------------------------------------------------------------------------------------------

ಪಂಚೆ ನೆಲದವರೆಗೆ ಮುಟ್ಟಿದ್ದರಿಂದ ಕಾಲು ನೆಲದ ಮೇಲೆ ಇತ್ತೋ ಇಲ್ಲವೋ ಗಪ್ಪಜ್ಜನದು ಗೊತ್ತಾಗುತ್ತಿರಲಿಲ್ಲ .ಕೊಟ್ಟಿಗೆಯಲ್ಲಿದ್ದ ಗೌರಿ ಕೂಡ ಪ್ರಸನ್ನವದನಳಾದಂತೆ ಕಾಣುತ್ತಿತ್ತು.ಊರಮನೆ ಮನೆ ಜನರೆಲ್ಲಾ  ಸೇರಿ ದೇವಸ್ಥಾನ ಒಂದು ಆಗಿಬಿಡಲಿ ಹೇಳ ತೀರ್ಮಾನವೂ .,  ರಸ್ತೆ ಮೇಲಿನ .,ದತ್ತುವಿಗೆ ಸೇರಿದ್ದ ಒಂದಿಷ್ಟು ಜಾಗದ ದಾನವೂ ಎಲ್ಲ ಸೇರಿ.ಇನ್ದೆಕೂ ಊರು ನಂದನ ವನದಂತೆ ಕಾಣುತ್ತಿತ್ತು ಗಪ್ಪಜ್ಜನಿಗೆ.ಬೆಂಗಳೂರಿನಲ್ಲಿದ್ದ ರಾಮುವಿನ ಮಗ ಕಾಂತ್ರಾಟುದಾರ ಪ್ರಕಾಶ ತಾ ಕಟ್ಟಿಸಿ ಕೊಡ್ತೆ ದೆವ್ಸ್ತಾನವ ಅಂತೆಲ್ಲ ಹೇಳಿದ್ದು ಕೇಳಿ ಅಬ್ಬ ., ದೇವರು ಬರುವ ಕಾಲಕ್ಕೆ ತಾನೆ ದಾರಿ ಮಾಡಿ ಕೊಳ್ಳುವ  ಅನ್ನುವ ಮಾತು ನಿಜವೆನಿಸಿತ್ತು ಗಪ್ಪಜ್ಜನಿಗೆ.ಇದೊಂದು ಆಗಿಬಿಟ್ಟರೆ ತಣ್ಣಗೆ ಕಣ್ಣುಮುಚ್ಚಲಕ್ಕು ಅಂತ ಹೇಳಿ ಹೆಂಡತಿ ಜಾನಕಿಯ ಹತ್ತಿರ ಬೈಸಿಕೊಂಡೂ  ಆಗಿತ್ತು.೭೦ ರ ಇಳಿವಯಸ್ಸಿನ ಗಪ್ಪಜ್ಜ ಒಂದೇ ದಿನದಲ್ಲಿ ೭೦ ರ ಹರೆಯದ ಗಪ್ಪಜ್ಜನಾಗಿದ್ದ.

ಅಂದಿನಿಂದ ಗಪ್ಪಜ್ಜನಿಗೆ ದೇವಸ್ತಾದ ಕಾಯಕವೇ ಮನೆ ಆಯಿತು.ಏರು ಜವ್ವನದ ಹುಡುಗರು ನಾಚುವಂತೆ ಜಾಗ ಸರಿ ಮಾಡುವ, ದೇವಸ್ತಾನದ ಕಟ್ಟಡ ಕೆಲಸ.ಮೇಲ್ವಿಚಾರಣೆ., ಸರಿಯಾದ ಲೆಕ್ಕ ಪತ್ರ ವಿಚಾರಣೆ ಬಣ್ಣ .,ರೇತಿ ಅಂತ ಹೇಳುತ್ತಲೇ ವರ್ಷವಾಗಿತ್ತು.ಗಪ್ಪಜ್ಜನ ಬೆವರ ಹನಿಯ ಮೂರ್ತ ರೂಪ ಬ್ರಹ್ಮ ಗಣಪತಿ ದೇವಸ್ತಾನ ಊರ ಮದ್ಯದ ಜಾಗದಲ್ಲಿ ನಿಂತಿತ್ತು.

ದೇವರು ಕೊಪ್ಪಲಿಗೆ ಬರಲು ಮಡಿಯುಟ್ಟು ನಿಂತಿದ್ದ.

No comments:

Post a Comment