Thursday, May 26, 2011

ದೇವರು-೩

...ಬರ್ಜರಿ ಚಪ್ಪರ ಕಂಡಿತ್ತು ಕೊಪ್ಪಲು.,ಕೊಪ್ಪಲ ಊರವರ  ಮಾತಿನ ಸಂಬ್ರಮಕ್ಕೆ ಒಣಗಿದ ಸೋಗೆಯ ಗರಿಯ ಸದ್ದು ಕಳೆದು ಹೋಗಿತ್ತು.ಹರಿ ಬಟ್ಟರ  ಮಂತ್ರದೊಂದಿಗೆ ಸಂಗೂಪಾಂಗವಾಗಿ ನಡೆದ ಹೋಮ .,ಆ ಬ್ರಹ್ಮಗಣಪತಿಯ ಬರುವಿಕೆಗೆ ಹೆದ್ದಾರಿಯನ್ನೊದಗಿಸಿತ್ತು.ದೇವರ ಪ್ರಾಣಪ್ರತಿಷ್ಟೆಯೊಂದಿಗೆ ದೇವಸ್ಥಾನ ನೆಲೆ ಊರಿತ್ತು.

"ನಿನ್ನಿಂದಾಗಿ ಊರಿಗೊಂದು ಗುರುತು ಬಂತು ಗಪ್ಪಣ್ಣ....ದೇವರು ತಣ್ಣಗೆ ಇಟ್ಟಿರ್ಲಿ ನಿನ್ನ" ಎಂದು ಹರಸಿ ಹೋಗಿದ್ದಳು ಪುಟ್ಟಜ್ಜಿ.ಅಷ್ಟೆಲ್ಲ ಕಾರ್ಯ ಮಾಡಿದ ಗಪ್ಪಜ್ಜನಿಗೂ ಒಂದು ಶಾಲು ಹೊಡೆಸಿ ಮಾಡಿದ ಕಾರ್ಯಕ್ರಮದಲ್ಲಿ ಹೋಗಳದವರಿಲ್ಲ ಗಪ್ಪಜ್ಜನನ್ನ.
ದೇವರು ಸಂತುಷ್ಟನಾಗಿದ್ದನೂ ಇಲ್ಲವೂ ,.ಗಪ್ಪಜ್ಜನಾಗಿದ್ದ.

ವೆಂಕಣ್ಣ ಹೊಟ್ಟೆಯಲ್ಲೇ ಅವಲಕ್ಕಿ ಕುಟ್ಟಿದ್ದ.

                                         ------------------------------------------------------------------------------------------------------------------------------------------------

ಕಮಿಟಿಯ ಸಭೆಯಲ್ಲಿ ., ಕಾರ್ಯದರ್ಶಿ ವೆಂಕಣ್ಣನ ತಕರಾರು ಸರಿಯಿತ್ತೆಂದು ಎಲ್ಲರಿಗೂ ಅನಿಸಿತ್ತು.ಅಲ್ಲ ಬ್ಯಾಡ ಬ್ಯಾಡ ಅಂದ್ರೂ  ನಾಲ್ಕು ವರ್ಷದ ಹಿಂದೆ  ಕುಣ್ಕಂಡು ಕುಣ್ಕಂಡು ದೇವಸ್ಥಾನ ಕಟ್ಟಿದ..ಇಗ ಕಮಿಟಿ ನಿರ್ಧಾರ ಮಾಡಿರ ವರಾಡ ಕಟ್ಟದಿಲ್ಲೇ ಅಂದ್ರೆ ಹೆಂಗೆ??.,ಒಂದ್ ದೇವಸ್ಥಾನ ನೆಡ್ಸದು ಅಂದ್ರೆ ತಮಾಷೆ ವಿಷಯವಾ..??

ಗಪ್ಪಜ್ಜ ., ನಿದಾನದ ದನಿಯಲ್ಲಿ ನುಡಿದ."ವೆಂಕು, ನಮ್ಮುರಿಂದು ಹೊಳೆ ಆಚೆಗಿನ ಜಮೀನು .,ಸವಳು ನಿಂಗಳಷ್ಟು ಪಸಲು ಬತಲೇ.,ವರಾಡ ಕೊಡದಿಲ್ಲೆ ಅಂತ ಹೇಳದಿಲ್ಲೆ., ನ್ಯಾಯಯುತವಾದ ವರಾಡ  ಹಾಕು"

"ಸುಮ್ಮನ್ಗಿರಾ ., ನೀ ಕೃಷಿ ಮಾಡದೇ ಇದ್ದದ್ದಕ್ಕೆ ., ಇಲ್ದೆ ಇರ ಸಬೂಬು ಹೇಳಡ"

"ನೋಡು ., ಇದೆ ವರಾಡ ಆದ್ರೆ ನಂಗೆ ಕೊಡದು ಕಷ್ಟ., ಧರ್ಮ ಹೇಳಿ ಬನ್ನಿ ., ನೋಡಿ ಮಾಡಿ ಕೊಡ್ತಿ"

ಮೀಟಿಂಗ್ ಮುಗ್ದಿತ್ತು.ಹೆಜ್ಜೆಗಳು ಭಾರವಾಗಿತ್ತು.
                                                ------------------------------------------------------------------------------------------------------------------------------------

ಮರುದಿನ ಊರಿನ ಪಂಚಾಯ್ತೀಗೆ ನಿರ್ದಾರ ,ಗಪ್ಪಜ್ಜನ ಕಿವಿಗೆ ಬಿದ್ದಿತ್ತು., 'ವರಾಡದ ವಿಷಯವಾಗಿ ಗಪ್ಪಜ್ಜನ ಮನೆಯನ್ನ ಬಹಿಷ್ಕಾರ ಮಾಡಕ್ಕು'

ದೇವರು ಕೊಪ್ಪಲಿನಿಂದ ಹೆಜ್ಜೆ ಆಚೆ ಇಟ್ಟಿದ್ದ ಅವತ್ತು ಸಂಜೆ                             

No comments:

Post a Comment